80.
ಬ್ರಹ್ಮಚರ್ಯ
1. ಅತಿ ನಿದ್ರಾವಂತನಾಗದಿರಲಿ, ಪ್ರಯತ್ನಶೀಲನಾಗಲಿ
ಹಾಗು ಜಾಗರೂಕನಾಗಲಿ, ತೂಗಾಡಿಕೆ, ಮಾಯಾವಿತನ, ನಗು, ಹಾಸ್ಯ, ಆಟ,
ಕ್ರೀಡೆ ಮತ್ತು ಮೈಥುನ ಹಾಗು
ಶೃಂಗಾರವನ್ನು
ತ್ಯಜಿಸಲಿ.
400
2. ಸರ್ಪದ ಹೆಡೆಯಿಂದ ಕಾಲುಗಳನ್ನು
ರಕ್ಷಿಸುವ ಹಾಗೇ ಯಾರು ಕಾಮಗಳನ್ನು
ತ್ಯಾಗ ಮಾಡುವನೋ ಆತನು ಈ
ಸಂಸಾರದಲ್ಲಿ ಎಚ್ಚರಿಕೆಯಿಂದ ವಿಷಪೂರಿತದಂತಿರುವ ಬಯಕೆಯನ್ನು ತ್ಯಜಿಸುವನು. 401
3. ಮೊದಲು ಆತನ ಯಾವ
ಯಶಸ್ಸು ಮತ್ತು ಕೀತರ್ಿ ಇತ್ತೋ
ಅದೆಲ್ಲವೂ ಇದರಿಂದ (ಕಾಮ) ನಷ್ಟವಾಗುತ್ತದೆ.
ಇದನ್ನು ಕಂಡಾದರೂ ಮೈಥುನವನ್ನು ತ್ಯಜಿಸುವ
ಅಭ್ಯಾಸ ಮಾಡಲಿ.
4. ಯಾರು ಬಯಕೆಗಳಿಗೆ ವಶಿಯಾಗಿದ್ದಾನೋ
ಭಿಕಾರಿಯಂತೆ ಯೋಚಿಸುವನೋ ಇಂತಹ ವ್ಯಕ್ತಿಯು ಪರರ
ನಿಂದೆ ಕೇಳಿ ಮೌನವಾಗುತ್ತಾನೆ. 403
5. ಎಲ್ಲಿಯವರೆಗೆ ನರನಾರಿಯರಿಗೆ ಇರುವ ಬಂಧನವು ಅದು
ಎಷ್ಟೇ ಅಲ್ಪವಾಗಿರಲಿ, ಅದು ಕಡಿದು ಹಾಕಲ್ಪಟ್ಟಿಲ್ಲವೋ
ಅಲ್ಲಿಯವರೆಗೆ ಹಾಲು ಕುಡಿಯುವ ಕರು
ಹಸುವಿಗೆ ಅಂಟಿರುವಂತೆ ಮನುಷ್ಯನ ಮನಸ್ಸು ಬಂಧನಕ್ಕೆ
ಸಿಕ್ಕಿಕೊಂಡಿರುತ್ತದೆ. 404
6. ಯೌವ್ವನದಲ್ಲಿ ಬ್ರಹ್ಮಚಾರ್ಯ ಪಾಲಿಸದವನು ಅಥವಾ ಧನವನ್ನು ಗಳಿಸದವನು.
ಗುರಿ ತಲುಪದ ಬಾಣಗಳಂತೆ ಅಪ್ರಯೋಜಕನಾಗಿ
ಹಿಂದಿನದನ್ನು ಹಲುಬುತ್ತಾ ಮುದಿಯಾಗಿ ಬಿದ್ದಿರುವನು. 40
No comments:
Post a Comment