84.
ಮಿಶ್ರಣ
1. ಅಸಹಿಷ್ಣುಗಳಲ್ಲಿ ಕ್ಷಾಂತಿಶೀಲನೂ, ಕ್ರೂರಿಗಳಲ್ಲಿ ಸಾಧುವು ಮತ್ತು ಲೋಭಿಗಳಲ್ಲಿ
ವಿರಾಗಿಯಾಗಲಿ. 420
2. ರಾಗದಂತಹ ಬೆಂಕಿಯಿಲ್ಲ. ದ್ವೇಷದಂತಹ
ಹಿಡಿತವಿಲ್ಲ, ಮೋಹದಂತಹ ಬಲೆಯಿಲ್ಲ, ತೃಷ್ಣೆಯಂತಹ
ನದಿಯಿಲ್ಲ. 421
3. ಧ್ಯಾನದಿಂದ ಆನಂದ ಮತ್ತು ಶಾಂತತೆಗಳು
ಉದಯಿಸುತ್ತವೆ. ಬಯಕೆಗಳಿಂದ ನಿರಾಶೆ ಮತ್ತು ಚಿಂತೆಗಳು
ಉದಯಿಸುತ್ತವೆ.422
4. ಹೇಳಿದ್ದೆಲ್ಲವನ್ನು ಕೇಳು, ಮುಖ್ಯವಾದುದನ್ನು ಹಿಡಿದಿಟ್ಟುಕೋ
ಅರ್ಹವಾದುದನ್ನು ನುಡಿ, ಆದರೆ ಯಾವುದಕ್ಕೂ
ಅಂಟಬೇಡ.423
5. ಕೋಪದ ನುಡಿಯು ಹರಿತವಾದ
ಕತ್ತಿಯಂತೆ, ದುರಾಸೆಯು ಮರಣಾಂತಿಕ ವಿಷವಾಗಿದೆ. ದ್ವೇಷವು ಭಯಂಕರ ಬೆಂಕಿಯಾಗಿದೆ
ಮತ್ತು ಮೋಹವು ಕಡುಕತ್ತಲೆಯಾಗಿದೆ. 424
6. ದಾನವೇ ಮಹಾ ಲಾಭವಾಗಿದೆ,
ಕೃತಜ್ಞತೆಯಿಲ್ಲದೆ ಪಡೆಯುವುದು ಮಹಾ ನಷ್ಟವಾಗಿದೆ. ಸಹನೆಯೇ
ಶ್ರೇಷ್ಠ ರಕ್ಷಾಕವಚವಾಗಿದೆ. ಶ್ರೇಷ್ಠ ಆಯುಧವೆಂದರೆ ಪ್ರಜ್ಞಾ
ಆಗಿದೆ.425
7. ಅಕುಶಲ ಯೋಚನೆಗಳು ಮಹಾ
ಡಕಾಯಿತವಾಗಿದೆ. ಶೀಲವೇ ಶ್ರೇಷ್ಠ ಐಶ್ವರ್ಯನಿಧಿಯಾಗಿದೆ.
ಅಜ್ಞಾನದಿಂದ ಪ್ರಪಂಚವು ಹಾಳಾಗುತ್ತದೆ. ಸ್ವಾರ್ಥ ಅಸೂಯೆಯಿಂದ ಸ್ನೇಹ
ಮುರಿಯುತ್ತದೆ. ದ್ವೇಷವೇ ಪ್ರಬಲ ಜ್ವರವಾಗಿದೆ.
ಬುದ್ಧರೇ ಶ್ರೇಷ್ಠ ವೈದ್ಯರಾಗಿ
ದ್ದಾರೆ. 426
No comments:
Post a Comment