Monday 19 September 2016

the quotes on 3rd noble truth in kannada (ದುಃಖ ನಿರೋಧ ಸತ್ಯ)

6. ದುಃಖ ನಿರೋಧ ಸತ್ಯ

1.          ಯಾವ ಮುಳ್ಳಿನಿಂದ ಚುಚ್ಚಿಕೊಂಡ ವ್ಯಕ್ತಿ ಸರ್ವ ದಿಕ್ಕುಗಳಿಗೂ ಓಡುವನೋ, ಅದೇ ಮುಳ್ಳನ್ನು ತೆಗೆದ ನಂತರ ಆತನು ಓಡುವುದೂ ಇಲ್ಲ, ಮುಳುಗುವುದೂ ಇಲ್ಲ.       27


2.          ಯಾರಿಗೆ ಯಾವ ಪ್ರಿಯಬಯಕೆಗಳಿಲ್ಲವೋ ಅವರಿಗೆ ಯಾವ ದುಃಖವೂ ಇಲ್ಲ. ಯಾರಲ್ಲಿ ಉದ್ರೇಕ ಹಾಗು ವಿಷಾಧವಿಲ್ಲವೋ ಅವರಿಗೆ ನಾನು ಶೋಕರಹಿತ ಎನ್ನುತ್ತಾನೆ.           28


3.          ಪ್ರಿಯ ಬಯಕೆ ಇಲ್ಲದವನು ದುಃಖರಹಿತನಾಗುತ್ತಾನೆ.    29


4.         ಎಲ್ಲವನ್ನೂ ಪೂರ್ಣವಾಗಿ ಅರಿತವರು, ಯಾವುದರಲ್ಲಿಯೂ ರಮಿಸುವುದಿಲ್ಲ. ಎಲ್ಲವನ್ನು ಅರಿತ ಅವರು ದುಃಖವೆಲ್ಲದರಿಂದ ಮುಕ್ತರಾಗಿರುತ್ತಾರೆ.       30


5.          ಕಾಯವು ಚೂರು ಚೂರಾಗಿ, ಗ್ರಹಿಕೆಯು ಅಳಿಸಿ ಹೋಗಿ, ವೇದನೆಗಳೆಲ್ಲವೂ ತಂಪಾಗಿ, ಸಂಖಾರವು ಉಪಶಮನ ಹೊಂದಿ ಅರಿವು (ವಿಞ್ಞನ) ತನ್ನ ಕೊನೆಯನ್ನು ಮುಟ್ಟುತ್ತದೆ.        31


No comments:

Post a Comment