7.
ಆರ್ಯ
ಅಷ್ಠಾಂಗ ಮಾರ್ಗ
1. ಯಾರು ದುಃಖವನ್ನು
ಅರಿಯುತ್ತಾರೋ ಅವರು ದುಃಖದ ಉತ್ಪತ್ತಿಯನ್ನು ಅರಿಯುತ್ತಾರೆ, ಹಾಗೆಯೇ ಅದರ ನಿರೋಧ
ವನ್ನು ಅರಿಯುತ್ತಾರೆ ಮತ್ತು
ನಿರೋಧದ ಮಾರ್ಗವನ್ನು ಅರಿಯುತ್ತಾರೆ. 32
2. ಎಲ್ಲಾ ವಿಷಯಗಳು (ಸಂಖಾರ) ಅನಿತ್ಯವೆಂದು
ಒಬ್ಬನು ಪ್ರಜ್ಞೆಯಿಂದ ಅರಿತಾಗ ಆತನು ವಿರಾಗ ಹೊಂದುತ್ತಾನೆ. ಇದೇ ಪರಿಶುದ್ಧತೆಗೆ ಮಾರ್ಗ. 33
3. ನಿಮಗೆ ನೀವೇ ಪರಿಶ್ರಮಪಡಬೇಕು. ತಥಾಗತರು ಕೇವಲ
ಮಾರ್ಗವನ್ನು ಮಾತ್ರ ತೋರಿಸುತ್ತಾರೆ. ಮಾರ್ಗಗಳಲ್ಲಿ ಅಷ್ಟಾಂಗ ಮಾರ್ಗವೇ ಶ್ರೇಷ್ಠ. ಯಾರು ಈ
ಮಾರ್ಗದಲ್ಲಿ ಹೋಗುತ್ತರೋ ಅವರು ಬುದ್ಧರ ಬೋಧನೆಯಂತೆ ನಡೆದು ದುಃಖಮುಕ್ತರು ಆಗುತ್ತಾರೆ. 34
4. ಯಾರು ಶ್ರಮಶೀಲನಾಗಬೇಕಿದ್ದಾಗ
ಶ್ರಮಿಸುವುದಿಲ್ಲವೋ ಯುವಕನಾಗಿಯು, ಬಲಿಷ್ಠನಾಗಿಯು, ಸೋಮಾರಿಯಾಗಿರು ವನೋ, ಯಾರು ತನ್ನ ಲಕ್ಷವನ್ನು ಸಡಿಲಗೊಳಿಸಿರುವನೋ ಅಂತಹ
ಚಿಂತನೆಯನ್ನು ಬಿಟ್ಟಿರುವನೋ ಅಂತಹ ಸೋಮಾರಿ ಜ್ಞಾನದ ಮಾರ್ಗ ಅರಿಯಲಾರ. 35
5. ಇಂದ್ರಿಯ ಭೋಗಗಳನ್ನು, ದೇಹದಂಡನೆಯನ್ನು ಮೀರಿದ ಮಧ್ಯಮ ಮಾರ್ಗವು ಸಮ್ಮಸಂಬುದ್ಧರಿಂದ ಪ್ರಕಾಶಿಸಲ್ಪಟ್ಟಿದೆ. ಅದು
ದೃಷ್ಟಿಯನ್ನು, ಜ್ಞಾನವನ್ನು, ಅಭಿಜ್ಞಾವನ್ನು, ಶಾಂತಿಯನ್ನು, ಸಂಬೋಧಿಯನ್ನು ಮತ್ತು ನಿಬ್ಬಾಣವನ್ನು ನೀಡುತ್ತದೆ. 36
No comments:
Post a Comment