3. ಸಂಘ
1. ಚಿನ್ನದ ನಾಣ್ಯಗಳ ಮಳೆಗರೆದರೂ ಇಂದ್ರಿಯಸುಖಗಳ ತೃಪ್ತಿ ಆಗುವುದಿಲ್ಲ.
ಕಾಮಸುಖಗಳು ಅಲ್ಪಸ್ವಾದ ಹಾಗು ಅಪಾರ ದುಃಖದಿಂದ ಕೂಡಿದೆ. ಇದನ್ನು ಅರಿತು ಪಂಡಿತರು ದಿವ್ಯವಾದ
ಸುಖಗಳಲ್ಲೂ ಆನಂದಿಸುವುದಿಲ್ಲ. ಸಮ್ಮಾಸಂಬುದ್ಧರ ಶ್ರಾವಕರು ಸದಾ ತೃಷ್ಣಾಕ್ಷಯದಲ್ಲೇ
ನಿರತರಾಗುತ್ತಾರೆ. 12
2. ಬುದ್ಧ ಭಗವಾನರ ಶಿಷ್ಯರು, ಯಾರು ಹಗಲು-ರಾತ್ರಿ ಧ್ಯಾನದಲ್ಲೇ ಆನಂದಿತರಾಗಿರುವರೋ ಅಂತಹವರು ಸದಾ
ಜಾಗ್ರತೆಯಿಂದಿರುತ್ತಾರೆ. 13
3. ಯಾರು ಪರಮ ಗಂಭೀರ ಪ್ರಜ್ಞಾವಾನ್ ಬುದ್ಧರಿಂದ ಪ್ರಕಾಶಿಸಲ್ಪಟ್ಟ ಆರ್ಯ
ಸತ್ಯಗಳನ್ನು ಮನನ ಮಾಡಿದ್ದಾರೋ ಅವರು ತೀರ ಎಚ್ಚರ ತಪ್ಪಿದರೂ ಎಂಟನೆಯ ಜನ್ಮ ಪಡೆಯುವುದಿಲ್ಲ. ಇದು
ಸಂಘದ ಉತ್ತಮ ರತ್ನವಾಗಿದೆ. 14
4. ನಕ್ಷತ್ರಗಳಲ್ಲಿ ಮುಖ್ಯ ಚಂದಿರ. ಬೆಳಗುವುದರಲ್ಲಿ ಪ್ರಧಾನ
ಸೂರ್ಯನಾಗಿದ್ದಾನೆ. ಇಚ್ಛಿತರ ಮುಖ್ಯ ಅಭಿಲಾಷೆ ಪುಣ್ಯವಾಗಿದೆ. ಹಾಗೆಯೇ ಪೂಜೆ ಆತಿಥ್ಯಕ್ಕೆ
ಮುಖ್ಯವು ಸಂಘವಾಗಿದೆ. 15
5. ಯಾರು ಪೂಜ್ಯಾರ್ಹರಾದವರನ್ನು, ಬುದ್ಧರನ್ನು ಅಥವಾ ಶ್ರಾವಕರನ್ನು ಪೂಜಿಸುವರೋ, ಪ್ರಪಂಚದ ತಡೆಗಳನ್ನು ದಾಟಿ ಶೋಕ ಸಂಕಟಗಳಿಂದ ಪಾರಾದ, ಮುಕ್ತರಾದ, ಶಾಂತ ಸ್ವರೂಪಿಗಳನ್ನು
ಭಯವಿಲ್ಲದವರನ್ನು ಯಾರು ಪೂಜಿಸುವರೋ ಅವರು ಗಳಿಸಿದ ಪುಣ್ಯವನ್ನು ಯಾವುದರಿಂದಲೂ ಅಳಿಯಲು
ಸಾಧ್ಯವಿಲ್ಲ. 16
No comments:
Post a Comment