2. ಧಮ್ಮ
1. ಸರ್ವ ಪಾಪವನ್ನು ಮಾಡದಿರುವುದು, ಕುಶಲವನ್ನು (ಒಳ್ಳೆಯತನವನ್ನು) ಸಂಪಾದಿಸುವುದು, ಸ್ವಚಿತ್ತವನ್ನು ಪರಿಶುದ್ಧಿ ಗೊಳಿಸುವುದು - ಇದೇ ಬುದ್ಧರ ಶಾಸನವಾಗಿದೆ. 7
2. ಕೆಟ್ಟದ್ದನ್ನು ಆಡದಿರುವುದು, ನೋಯಿಸದಿರುವುದು, ಪಾತಿಮೋಕ್ಖ (ಭಿಕ್ಖುನಿಯಮ)
ಅನುಸಾರವಾಗಿ ಸಂಯಮದಿಂದಿರುವುದು, ಆಹಾರದಲ್ಲಿ
ಮಿತವಾಗಿರುವುದು, ಒಂಟಿಯಾಗಿ ವಾಸಿಸುವುದು,
ಮನವನ್ನು ಯಾವಾಗಲೂ ಧ್ಯಾನ ಉನ್ನತಿಯಲ್ಲಿ ನೆಲೆ ಮಾಡುವುದು - ಇದೇ
ಬುದ್ಧರ ಶಾಸನವಾಗಿದೆ. 8
3. ಕಾರಣದಿಂದಾಗುವ ಎಲ್ಲಾ ವಿಷಯಗಳನ್ನು (ಧಮ್ಮವನ್ನು), ಅವುಗಳ ಸ್ಪಷ್ಟ ಕಾರಣಗಳನ್ನು ಮಹಾಸಮಣರು ತಿಳಿಸಿದ್ದಾರೆ ಮತ್ತು
ತಥಾಗತರು ಅವುಗಳ ನಿರೋಧವನ್ನು ಹಾಗು ಅದರ ಮಾರ್ಗವನ್ನು ಸಹಾ ತಿಳಿಸಿದ್ದಾರೆ. 9
4. ಧಮ್ಮದಾನವು ಎಲ್ಲಾ ದಾನಗಳಿಗಿಂತ ಶ್ರೇಷ್ಠ, ಧಮ್ಮರಸವು ಉಳಿದ ರಸಗಳಿಗಿಂತ ಶ್ರೇಷ್ಠ, ಧಮ್ಮಾನಂದವು ಉಳಿದ
ಆನಂದಗಳಿಗಿಂತ ಶ್ರೇಷ್ಠ. ಯಾರು ತೃಷ್ಣೆಯನ್ನು ನಾಶಪಡಿಸಿಕೊಂಡಿರುವರೋ ಅವರು ದುಃಖವೆಲ್ಲದರಿಂದ
ಮುಕ್ತರಾಗಿದ್ದಾರೆ. 10
5. ಈ ಧಮ್ಮವು ಬಂದು ಸಾಧಿಸುವವರಿಗೆ ಹೊರತು ಬಂದು ನಂಬುವವರಿಗಲ್ಲ. ಇದು
ರಾಗ ದ್ವೇಷ ಮತ್ತು ಮೋಹದಿಂದ ಪೀಡಿತರಾಗಿರುವವರಿಗೆ ಅರಿಯಲಾಗುವುದಿಲ್ಲ. 11
No comments:
Post a Comment